KN/661213b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೃಷ್ಣನಿಗೆ ಅಸಂಖ್ಯಾತ ವಿಸ್ತರಣೆಗಳಿವೆ. ನಮ್ಮ ಮುಂದೆ ಇದ್ದಾಗ ಅವುಗಳಲ್ಲಿ ಕೆಲವು ಆತನು ದೇವೋತ್ತಮ ಪರಮ ಪುರುಷನೆಂದು ಸಾಬೀತುಪಡಿಸಲು ತೋರಿಸಲ್ಪಟವು, ಏಕೆಂದರೆ ಭವಿಷ್ಯದಲ್ಲಿ ಅನೇಕ ಮೂರ್ಖರು ಕೃಷ್ಣನಾಗಿ, ದೇವರಾಗಿ, ಅಥವಾ ದೇವರ ಅವತಾರವಾಗಿ ನಕಲು ಮಾಡುತ್ತಾರೆ. ಆದರೆ ಕೃಷ್ಣ ತನ್ನ ಜೀವನದಲ್ಲಿ ಅನೇಕ ಅಸಾಮಾನ್ಯ ವೈಶಿಷ್ಟ್ಯಗಳನ್ನು ಹೊಂದಿದ್ದಾನೆ, ಅದನ್ನು ಯಾರೂ ತೋರಿಸಲಾರರು. ಗೋವರ್ಧನದಂತೆ. ನೀವು ಆ ಚಿತ್ರವನ್ನು ನೋಡಿದ್ದೀರಿ. ಏಳು ವರ್ಷ ವಯಸ್ಸಿನಲ್ಲಿ ಅವನು ಬೆಟ್ಟವನ್ನು ಎತ್ತಿದನು. ಮತ್ತು ಅವನು ಯುವಕನಾಗಿದ್ದಾಗ ಹದಿನಾರು ಸಾವಿರ ಹೆಂಗಸರನ್ನು ಮದುವೆಯಾದನು, ಮತ್ತು ಹದಿನಾರು ಸಾವಿರ ವೈಶಿಷ್ಟ್ಯಗಳು... ಆದ್ದರಿಂದ... ಮತ್ತು ಅವನು ಕುರುಕೇತ್ರ ಕದನದಲ್ಲಿದ್ದಾಗ, ಅವನು ವಿಶ್ವರೂಪವನ್ನು ತೋರಿಸಿದನು. ಆದ್ದರಿಂದ ತಮನ್ನು ತಾವೇ 'ನಾನು ದೇವರು' ಎಂದು ಹೇಳಿಕೊಳ್ಳುವ ಮೊದಲು, ಅವರು ಈ ಅಸಾಮಾನ್ಯ ಲಕ್ಷಣಗಳನ್ನು ತೋರಿಸಲು ಸಿದ್ಧರಾಗಿರಬೇಕು. ಇಲ್ಲದಿದ್ದರೆ, ವಿವೇಕವಿರುವ ಯಾವುದೇ ವ್ಯಕ್ತಿ ಯಾರೋ ಮೂರ್ಖನನ್ನು ಭಗವಂತನೆಂದು ಸ್ವೀಕರಿಸನು.”
661213 - ಉಪನ್ಯಾಸ CC Madhya 20.164-173 - ನ್ಯೂ ಯಾರ್ಕ್