KN/680718 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆಕಾಶದಲ್ಲಿ ನೂರು ಮೈಲುಗಳಷ್ಟು ಮೋಡ ಕವಿದ ವಾತಾವರಣವಿರಬಹುದು, ಆದರೆ ನೂರು ಮೈಲುಗಳು ಸಹ, ಸೂರ್ಯನನ್ನು ಆವರಿಸಲು ಸಾಧ್ಯವಿದೆಯೇ, ನೂರು ಮೈಲುಗಳ ಮೋಡ ? ಸೂರ್ಯನು ಸ್ವಯಂ ಈ ಭೂಮಿಗಿಂತ ನೂರಾರು ಸಾವಿರ ಪಟ್ಟು ಹೆಚ್ಚು. ಆದ್ದರಿಂದ ಮಾಯಾ ಪರ ಬ್ರಹ್ಮನನ್ನು ಆವರಿಸಲು ಸಾಧ್ಯವಿಲ್ಲ. ಮಾಯಾ, ಬ್ರಹ್ಮನ್ ಎಂಬ ಸಣ್ಣ ಕಣಗಳನ್ನು ಆವರಿಸಬಲ್ಲದು. ಆದ್ದರಿಂದ ನಾವು ಮಾಯೆ ಅಥವಾ ಮೋಡದಿಂದ ಆವರಿಸಿಕೊಳ್ಳಬಹುದು, ಆದರೆ ಪರಬ್ರಹ್ಮನನ್ನು ಎಂದಿಗೂ ಮಾಯೆ ಆವರಿಸುವುದಿಲ್ಲ. ಅದು ಮಾಯಾವಾದಾ ತತ್ವಶಾಸ್ತ್ರ ಮತ್ತು ವೈಷ್ಣವ ತತ್ತ್ವಶಾಸ್ತ್ರದ ನಡುವಿನ ಅಭಿಪ್ರಾಯದ ವ್ಯತ್ಯಾಸವಾಗಿದೆ. ಮಾಯಾವಾದಾ ತತ್ವಶಾಸ್ತ್ರವು ಪರಬ್ರಹ್ಮನನ್ನು ಆವರಿಸಿದೆ ಎಂದು ಹೇಳುತ್ತದೆ. ಪರಬ್ರಹ್ಮನನ್ನು ಆವರಿಸಲಾಗುವುದಿಲ್ಲ. ಹಾಗಾದರೆ ಅವನು ಹೇಗೆ ಸರ್ವೋಚ್ಚನಾಗುತ್ತಾನೆ? ಆವರಣವು ಸರ್ವೋಚ್ಚವಾಗುತ್ತದೆ. ಓಹ್, ಹಲವು ವಾದಗಳಿವೆ ಮತ್ತು ಹಲವು ಇವೆ ... ಆದರೆ ಮೋಡವು ಸೂರ್ಯನ ಬೆಳಕಿನ ಸಣ್ಣ ಕಣಗಳನ್ನು ಆವರಿಸುತ್ತದೆ ಎಂದು ನಾವು ಅನುಸರಿಸುತ್ತೇವೆ. ಆದರೆ ಸೂರ್ಯ ಹಾಗೆಯೇ ಉಳಿದಿದ್ದಾನೆ. ನಾವು ಜೆಟ್ ವಿಮಾನದಲ್ಲಿ ಹೋದಾಗ ನಾವು ಪ್ರಾಯೋಗಿಕವಾಗಿ ನೋಡುತ್ತೇವೆ, ನಾವು ಮೋಡದ ಮೇಲಿದ್ದೇವೆ. ಮೋಡ ನಮ್ಮ ತಲೆಯ ಮೇಲೆ ಇಲ್ಲ. ಸೂರ್ಯ ನಿಚ್ಚಳವಾಗಿದೆ. ಕೆಳಮಟ್ಟದಲ್ಲಿ ಸ್ವಲ್ಪ ಮೋಡವಿದೆ. "
680718 - ಉಪನ್ಯಾಸ ಆಯ್ದ ಭಾಗಗಳು - ಮಾಂಟ್ರಿಯಲ್