KN/680819 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಯಾರಾದರೂ ಭಗವಂತನಿಗೆ ಮಿಶ್ರಣವಿಲ್ಲದ ಭಕ್ತಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದರೆ, ಯಾವುದೇ ಮೀಸಲಾತಿ ಇಲ್ಲದೆ-ಅವ್ಯಾಭಿಚಾರಿಣಿ, ಕಲಬೆರಕೆ ಯಿಲ್ಲದೆ, ಕೇವಲ ಭಗವಂತನ ಶುದ್ಧ ಪ್ರೀತಿ, ಅನುಕೂಲ್ಯೇನ ಕೃಷ್ಣಾನುಶೀಲನಮ್(ಚೈ ಚ ಮದ್ಯ ೧೯.೧೬೭), ಅನುಕೂಲಕರವಾಗಿ-ಹೇಗೆ ಭಗವಂತನು ಸಂತೋಷಿಸುತ್ತಾನೆ. ಈ ಭಾವನೆಯೊಂದಿಗೆ, ಒಬ್ಬರು ಭಕ್ತಿ ಸೇವೆಯಲ್ಲಿ ನಿರತರಾಗಿದ್ದರೆ, ಮಾಂ ಚ ವ್ಯಭಿಚಾರಿಣಿ ಭಕ್ತಿ ಯೋಗೇನಾ ಯಃ ಸೇವತೆ... ಯಾರಾದರೂ ಆ ರೀತಿಯಲ್ಲಿ ತೊಡಗಿಸಿಕೊಂಡಿದ್ದರೆ, ಆಗ ಅವರ ಸ್ಥಾನವೇನು ? ಸ ಗುಣಾನ್ ಸಮತೀತೈತಾನ್ (ಭ.ಗೀತಾ ೧೪.೨೬ ). ಭೌತಿಕ ಸ್ವಭಾವದ ಮೂರು ಗುಣಗಳಿವೆ, ಅವುಗಳೆಂದರೆ ಸಾತ್ವಿಕ, ರಜೋ ಮತ್ತು ತಮೋ ಗುಣ, ಅವನು ಒಮ್ಮೆಗೇ ಮೇಲೇರುತ್ತಾನೆ. ಸ ಗುಣಾನ್ ಸಮತೀತೈತಾನ್ ಬ್ರಹ್ಮ-ಭೂಯಾಯ ಕಲ್ಪತೇ. ತಕ್ಷಣ ಅವನನ್ನು ಆಧ್ಯಾತ್ಮಿಕವಾಗಿ ಗುರುತಿಸಲಾಗುತ್ತದೆ. ತಕ್ಷಣವೇ. ಆದ್ದರಿಂದ ಈ ಪ್ರಕ್ರಿಯೆಯಾದ ಹರೇ ಕೃಷ್ಣ ಜಪವನ್ನು, ನಾವು ಅದನ್ನು ಬಹಳ ಚೆನ್ನಾಗಿ ಮಾಡಿದರೆ... ಚೆನ್ನಾಗಿ ಎಂದರೆ ನಾವು ತುಂಬಾ ಒಳ್ಳೆಯ ಸಂಗೀತಗಾರ ಅಥವಾ ಅತ್ಯಂತ ಕಲಾತ್ಮಕ ಗಾಯಕನಾಗಬೇಕು ಎಂದು ಅರ್ಥವಲ್ಲ. ಅಲ್ಲ. ಬಹಳ ಚೆನ್ನಾಗಿ ಎಂದರೆ ಪ್ರಾಮಾಣಿಕವಾಗಿ ಮತ್ತು ಹೆಚ್ಚಿನ ಗಮನದಿಂದ ಎಂದು ಅರ್ಥ. ಈ ಪ್ರಕ್ರಿಯೆಯು ಅತ್ಯುನ್ನತ ಯೋಗ ವ್ಯವಸ್ಥೆ. ಇದು ಅತೀಂದ್ರಿಯ ಕಂಪನ, ನೀವು ಹರೇ ಕೃಷ್ಣ ಕಂಪನದ ಮೇಲೆ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಿದರೆ.
680819 - ಉಪನ್ಯಾಸ ಶ್ರೀ.ಭಾ. ೦೭.೦೯.೧೨ - ಮಾಂಟ್ರಿಯಲ್