KN/681230c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಹರಿದಾಸ ಠಾಕೂರ ಅವರಂತೆಯೇ. ಹರಿದಾಸ ಠಾಕೂರ ಯಾವಾಗಲೂ ಏಕಾಂತ ಸ್ಥಳದಲ್ಲಿ ಜಪಿಸುತ್ತಿದ್ದರು. ಈಗ, ಯಾರಾದರೂ ಅಂತಹ ಉನ್ನತ ಸ್ಥಾನವನ್ನು ತಲುಪದೇ ಅನುಕರಿಸಿದರೆ, " ಓಹ್, ಹರಿದಾಸ ಠಾಕೂರರು ಜಪಿಸಿದರು. ನಾನೂ ಏಕಾಂತ ಸ್ಥಳದಲ್ಲಿ ಕುಳಿತು ಜಪಿಸುವೆನು, "ಅವನು ಅದನ್ನು ಮಾಡಲು ಸಾಧ್ಯವಿಲ್ಲ. ಅದು ಸಾಧ್ಯವಿಲ್ಲ. ಅವನು ಸುಮ್ಮನೆ ಅನುಕರಿಸುತ್ತಾನೆ ಮತ್ತು ಅವನು ಎಲ್ಲಾ ಅಸಂಬದ್ಧಗಳನ್ನು ಮಾಡುತ್ತಾನೆ. ಆದ್ದರಿಂದ ಪ್ರತಿಯೊಬ್ಬರೂ ತನ್ನದೇ ಆದ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ತನ್ನ ಕರ್ಮ ಫಲದಿಂದ", ಅವನು ಕೃಷ್ಣನಿಗೆ ಸೇವೆ ಸಲ್ಲಿಸಬೇಕು. ನಾವು ಹರಿದಾಸ ಠಾಕೂರರನ್ನು ಅನುಕರಿಸಲು ಸಾಧ್ಯವಿಲ್ಲ. ಅದು ಬೇರೆಯದೇ ಸ್ಥಾನ. ಒಬ್ಬರು ಆ ಸ್ಥಾನವನ್ನು ತಲುಪಿದರೆ, ಅದು ಬೇರೆ ವಿಷಯ, ಆದರೆ ಬಹುಮಟ್ಟಿಗೆ ಅದು ಸಾಮಾನ್ಯ ವ್ಯಕ್ತಿಗಾಗಿ ಅಲ್ಲ. ಆದ್ದರಿಂದ ಪ್ರತಿಯೊಬ್ಬರೂ ಅವರವರ ಔದ್ಯೋಗಿಕ ಕರ್ಮವನ್ನು ಮಾಡಬೇಕು ಮತ್ತು ತನ್ನ ಕರ್ಮ ಫಲದಿಂದ ಭಗವಂತನ ಸೇವೆ ಮಾಡಲು ಪ್ರಯತ್ನಿಸಬೇಕು."
ಉಪನ್ಯಾಸ ಭ. ಗೀತಾ ೦೩.೧೮-೩೦ - ಲಾಸ್ ಎಂಜಲೀಸ್