KN/690323 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹವಾಯಿ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ನಾವು ನಮ್ಮ ವಿದ್ಯಾರ್ಥಿಗಳಿಗೆ ಭಗವಂತನ ಸೇವೆ ಮಾಡಲು ಅವರ ಪುರಾತನ, ಶಾಶ್ವತವಾದ ಧರ್ಮವನ್ನು ಹೇಗೆ ಪುನರುಜ್ಜೀವನಗೊಳಿಸಬೇಕು ಎಂದು ಅಭ್ಯಾಸ ಮಾಡಲು ಶಿಕ್ಷಣ ನೀಡುತ್ತಿದ್ದೇವೆ. ಇದು ನಮ್ಮ ರೂಢಿ. ಇಲ್ಲಿಯೇ ಹುಡುಗರು ಹೇಗೆ ಭಗವಂತನ ಕುಳಿತುಕೊಳ್ಳುವ ಸ್ಥಳವನ್ನು ಅಲಂಕರಿಸಿರುವುದನ್ನು ನೀವು ನೋಡಬಹುದು, ಎಷ್ಟು ಸುಂದರವಾಗಿದೆ, ಹೂವುಗಳು ಮತ್ತು ಮೇಣದ ಬತ್ತಿಗಳು.ಇದು ತುಂಬಾ ದುಬಾರಿಯಲ್ಲ, ಆದರೆ ಅದು ಎಷ್ಟು ಸುಂದರವಾಗಿದೆಯೆಂದರೆ ಅದು ತಕ್ಷಣ ಆಕರ್ಷಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಮನೆಯಲ್ಲಿಯೇ ಅಭ್ಯಾಸ ಮಾಡಬಹುದು. ಕೆಲವು ಹೂವುಗಳು ಮತ್ತು ಕೆಲವು ಎಲೆಗಳನ್ನು ಸಂಗ್ರಹಿಸಿ ಅಲಂಕರಿಸುವುದು ಮತ್ತು ಕೆಲವು ಚಿತ್ರ ಅಥವಾ ಪ್ರತಿಮೆಯನ್ನು ಇಟ್ಟು ಅವನಿಗೆ ಕೆಲವು ಹೂವು, ಹಣ್ಣುಗಳನ್ನು ಅರ್ಪಿಸುವುದು, ಇದು ತುಂಬಾ ಕಷ್ಟದ ಕೆಲಸವೇ? ಪ್ರತಿಯೊಬ್ಬರೂ ಇದನ್ನು ಮಾಡಬಹುದು. ಮತ್ತು ಇದನ್ನು ಮಾಡುವುದರಿಂದ, ಅವನು ಜೀವನದ ಅತ್ಯುನ್ನತ ಪರಿಪೂರ್ಣತೆಯನ್ನು ಪಡೆಯುತ್ತಾನೆ: ಇನ್ನು ಮುಂದೆ ಈ ಭೌತಿಕ ಜಗತ್ತಿಗೆ ಬರುವುದಿಲ್ಲ ಮತ್ತು ಈ ಎಲ್ಲಾ ಅಸಂಬದ್ಧತೆಗಳನ್ನು ಅನುಭವಿಸುವುದಿಲ್ಲ. ಇದು ನಮ್ಮ ಆಚರಣೆ. "
690323 - ಉಪನ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು - ಹವಾಯಿ