KN/Prabhupada 0008 - ಕೃಷ್ಣ "ನಾನು ಎಲ್ಲರ ತಂದೆ" ಎನ್ನುತ್ತಾನೆ



Janmastami Lord Sri Krsna's Appearance Day Lecture -- London, August 21, 1973

ಆದ್ದರಿಂದ, ಕನಿಷ್ಠ ಭಾರತದಲ್ಲಿ, ಎಲ್ಲಾ ಮಹಾನ್ ವ್ಯಕ್ತಿಗಳ, ಸಂತರು, ಋಷಿಗಳು ಮತ್ತು ಆಚರ್ಯರು, ಅವರು ಈ ಅಧ್ಯತ್ಮ ಜ್ಞಾನವನ್ನು ಬಹಳ ಚೆನ್ನಾಗಿ ಮತ್ತು ಪೂರ್ಣವಾಗಿ ಕೃಷಿ ಮಾಡಿದ್ದಾರೆ ಮತ್ತು ನಾವು ಅದರ ಲಾಭ ಪಡೆಯುತ್ತಿಲ್ಲ ಈ ಶಾಸ್ತ್ರಗಳು ಮತ್ತು ನಿರ್ದೇಶನಗಳನ್ನು ಕೇವಲ ಭಾರತೀಯರಿಗೆ ಅಥವ ಹಿಂದುಗಳು ಅಥವ ಬ್ರಾಹ್ಮಣರಿಗೆ ಮಾತ್ರ ನೀಡುತ್ತಿಲ್ಲ. ಇಲ್ಲ ಇದು ಇರುವುದು ಎಲ್ಲರಿಗಾಗಿ ಏಕೆಂದರೆ ಕೃಷ್ಣನು ದೃಢ ಪಡಿಸುತ್ತಾನೆ(ಭ ಗೀ ೧೪.೪) ಸರ್ವ-ಯೋನಿಶು ಕೌಂತೇಯ ಸಂಭವಂತಿ ಮೂರ್ತಯಃ ಯಃ ತಾಸಾಮ್ ಮಹದ್ ಬ್ರಹ್ಮ ಯೋನಿರ್ ಅಹಂ ಬೀಜ-ಪ್ರದಃ ಪಿತಾ ಕೃಷ್ಣನು ದೃಢ ಪಡಿಸುತ್ತಾನೆ " ಪ್ರತಿಯೊಬ್ಬರಿಗೂ ನಾನೇ ತಂದೆ " ಆದರಿಂದ, ಅವನು ನಮ್ಮನು ಶಾಂತಿಯುತವಾಗಿ ಮತ್ತು ಸಂತೋಷವಾಗಿರಿಸಲು ಬಹಳ ಕಾತುರನಾಗಿದ್ದಾನೆ ಹೇಗೆ ಒಬ್ಬ ತಂದೆ ಅವರ ಮಗ ಸುಖವಾಗಿ ಮತ್ತು ಸಂತೋಷವಾಗಿರುವುದು ನೋಡಲು ಬಯಸುತ್ತಾರೆ ಹಾಗೆ; ಅದೇ ರೀತಿ ಕೃಷ್ಣನು ಸಹ ಪ್ರತಿಯೊಬ್ಬರನು ಸುಖವಾಗಿ ಮತ್ತು ಸಂತೋಷವಾಗಿರುವುದು ನೋಡಲು ಬಯಸುತ್ತಾರೆ ಆದ್ದರಿಂದ ಕೆಲವು ಸಮಯ ಅವನು ಬರುತ್ತಾನೆ (ಭ ಗೀ ೪.೭) ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ ಭವತಿ, ಇದೆ ಕೃಷ್ಣನು ಆಗಮನದ ಉದ್ದೇಶ ಆದ್ದರಿಂದ ಯಾರು ಆ ಕೃಷ್ಣನ ಸೇವಕರು, ಕೃಷ್ಣನ ಭಕ್ತರು, ಅವರು ಕೃಷ್ಣನ ಧರ್ಮಪ್ರಚಾರ ತೆಗೆದುಕೊಳ್ಳಬೇಕು ಅವರು ಕೃಷ್ಣನ ಧರ್ಮಪ್ರಚಾರ ಕಾರ್ಯವನ್ನು ತೆಗೆದುಕೊಳ್ಳಬೇಕು ಇದೇ ಚೈತನ್ಯ ಮಹಾಪ್ರಭುಗಳ ಆವೃತ್ತಿ ಆಮಾರ ಅಜ್ಞಾನ ಗುರು ಹಣಾ ಎಯಿ ದೇಶ ಯಾರೆ ದೇಖ ತಾರೆ ಕಹ, ಕೃಷ್ಣ-ಉಪದೇಶ (ಚೈ ಚ ಮಧ್ಯ ೭.೧೨೮) ಕೃಷ್ಣ-ಉಪದೇಶ. ಕೃಷ್ಣನ ಭಗವದ್ಗೀತೆಯಲ್ಲಿ ಏನು ಹೇಳಿರುವನೊಅದನ್ನು ಬೋಧಿಸಲು ಪ್ರಯತ್ನಿಸಿ. ಇದೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಚೈತನ್ಯ ಮಹಾಪ್ರಭುಗಳು ಹೇಳುತ್ತಾರೆ ಭಾರತ-ಭೂಮಿತೆ ಮನುಶ್ಯ ಜನ್ಮ ಹೈಲ ಯಾರ ಜನ್ಮ ಸಾರ್ಥಕ ಕರಿ ಪರ-ಉಪಕಾರ (ಚೈ ಚ ಆದಿ ೯.೪೧) ಆದರಿಂದ ಭಾರತೀಯರು, ಭಾರತೀಯರು ಪರೋಪಕಾರಕ್ಕಾಗಿಯೆ ಮಿಸಲು ಭಾರತೀಯರು ಇತರರ ದುರ್ಬಳಕೆ ಮಾಡುವುದ್ದಿಲ್ಲ. ಇದು ಭಾರತೀಯರ ವ್ಯವಹಾರವಲ್ಲ ಭಾರತದ ಇತಿಹಾಸವು ಯಾವಗಲು ಪರೋಪಕಾರಕ್ಕಾಗಿಯೆ. ಮತ್ತು ಹಿಂದೆ, ಪ್ರಪಂಚದ ಎಲ್ಲ ಭಾಗಗಳಿಂದಲೂ, ಭಾರತಕ್ಕೆ ಬರುತ್ತಿದ್ದರು, ಆಧ್ಯಾತ್ಮಿಕ ಜೀವನ ತಿಳಿಯಲು. ಯೆಸು ಕ್ರಿಸ್ತನು ಸಹ ಅಲ್ಲಿಗೆ ಹೋಗಿದ್ದರು. ಮತ್ತು ಚೈನದಿಂದ ಮತ್ತು ಇತರ ದೇಶಗಳಿಂದ. ಇದು ಇತಿಹಾಸ. ನಾವು ನಮ್ಮ ಈ ಆಸ್ತಿಯನ್ನು ಮರೆಯುತ್ತಿದ್ದಿವಿ. ನಾವು ಎಷ್ಟು ಕಲ್ಲೆದೆಯಾಗಿದ್ದಿವಿ. ಎಂಥಾ ಅದ್ಭುತ ಚಳುವಳಿ, ಕೃಷ್ಣ ಪ್ರಜ್ಞೆ, ಪ್ರಪಂಚದಾದ್ಯಂತ ನಡೆಯುತ್ತಿದೆ, ಆದರೆ ನಮ್ಮ ಭಾರತೀಯರು ಕಲ್ಲೆದೆಯವರು, ನಮ್ಮ ಸರ್ಕಾರವು ಕಲ್ಲೆದೆಯಾಗಿದೆ. ಅವರು ಇದನ್ನು ತೆಗೆದುಕೊಳ್ಳುವುದ್ದಿಲ್ಲ. ಇದು ನಮ್ಮ ದೌರ್ಭಾಗ್ಯ ಆದರೆ ಇದು ಚೈತನ್ಯ ಮಹಾಪ್ರಭುಗಳ ಧ್ಯೇಯ. ಅವರು ಹೇಳುತ್ತಾರೆ ಯಾವುದೇ ಭಾರತೀಯ, ಭಾರತ-ಭೂಮಿತೆ ಮನುಶ್ಯ ಜನ್ಮ, ಅವರು ಒಂದು ವೇಳೆ ಮಾನವನಾದ್ದರೆ, ಅವನು ಈ ವೈದಿಕ ಸಾಹಿತ್ಯದ ಪ್ರಯೋಜನವನ್ನು ತೆಗೆದುಕೊಳ್ಳುತ್ತಾ ಅವನ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಮತ್ತು ಈ ಜ್ಞಾನವನ್ನು ಪ್ರಪಂಚದೆಲ್ಲೆಡೆ ಪ್ರಚಾರ ಮಾಡಬೇಕು. ಇದೇ ಪರೋಪಕಾರ. ಆದರಿಂದ ಭಾರತ ಮಾಡಬಹುದು. ಅವರು ನಿಜವಾಗಿ ಶ್ಲಾಘನೆ ಮಾಡುತ್ತಿದ್ದಾರೆ. ಈ ಯುರೋಪಿಯನ್ನರು, ಅಮೆರಿಕನ್ ಯುವಕರು, ಅವರು ಹೇಗೆ ಮಹಾನ್ ಎಂದು ಶ್ಲಾಘನೆ ಮಾಡುತ್ತಿದ್ದಾರೆ ... ನನಗೆ ದಿನವು ಡಜನ್ಗಟ್ಟಲೆ ಪತ್ರಗಳು ಬರುತ್ತವೆ, ಹೇಗೆ ಅವರು ಈ ಚಳುವಳಿಯಿಂದ ಲಾಭ ಪಡೆಯುತ್ತೆದ್ದಾರೆ ಎಂದು ವಾಸ್ತವವಾಗಿ, ಇದು ಸತ್ಯ. ಇದು ಸತ್ತ ಮನುಶ್ಯನಿಗೆ ಜೀವ ಕೊಡುತ್ತಿದೆ. ಆದರಿಂದ ನಾನು ವಿಶೇಷವಾಗಿ ಭಾರತೀಯರನ್ನು ಮನವಿ ಮಾಡುತ್ತೆನೆ, ವಿಶೇಷವಾಗಿ ಹಿಸ್ ಎಕ್ಸಲೆನ್ಸಿ, ದಯವಿಟ್ಟು ಈ ಚಳುವಳಿಗೆ ಸಹಕರಿಸಿ, ಹಾಗು ನಿಮ್ಮ ಮತ್ತು ಇತರರ ಜೀವನವನ್ನು ಸಾರ್ಥಕಗೊಳಿಸಿರಿ ಇದೇ ಕೃಷ್ಣನ ದೇಯ್ಯ, ಕೃಷ್ಣನ ಆಗಮನದ ಕಾರಣ ನಿಮಗೆ ಬಹಳ ಧನ್ಯವಾದಗಳು